ಸಲ್ಮಾನ್ ಪರ ಕಣ್ಣೀರು ಸುರಿಸುವ ಗೋಸುಂಬೆಗಳೂ ಇದ್ದಾರೆ..!

9624338-3x2-700x467ದೊಡ್ಡ ಅಭಿಮಾನಿ ಬಳಗವನ್ನಿಟ್ಟುಕೊಂಡವನು ಕಂಠಪೂರ್ತಿ ಕುಡಿದು ಯಾರ ಮೇಲೆ ಬೇಕಾದರೂ ಕಾರು ಹತ್ತಿಸಬಹುದು. ಸಂರಕ್ಷಿತ ವನ್ಯಜೀವಿಗಳನ್ನು ಭೇಟೆಯಾಡಬಹುದು. ಅಂಥವನನ್ನು ಈ ದೇಶದ ಕಾನೂನು ಅಪರಾಧಿ ಎಂದು ಘೋಷಿಸಿ ಜೈಲಿಗೆ ತಳ್ಳಿದರೆ ಬಾಲಿವುಡ್ ಸ್ಟಾರ್ ಗಳು, ಆತನ ಅಂಧ ಅಭಿಮಾನಿಗಳು #WeLoveYouSalmanKhan , #SaveSalman ಎಂದು ಅಭಿಯಾನ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಇವರ ಹುಚ್ವು ಅಭಿಮಾನಕ್ಕೆ, ಲಜ್ಜೆಗೇಡಿತನಕ್ಕೆ..! ಬಾಲಿವುಡ್ ನಟನಾದ ಮಾತ್ರಕ್ಕೆ, ದೊಡ್ಡ ಅಭಿಮಾನಿ ಬಳಗ ಹೊಂದಿದ ಮಾತ್ರಕ್ಕೆ ಆತನನ್ನು ಈ ದೇಶದ ಕಾನೂನು ಕ್ಷಮಿಸಬೇಕಾ..? ಈ ದೇಶದಲ್ಲಿ ಶ್ರೀಮಂತರಿಗೊಂದು ಕಾನೂನು, ಬಡವರಿಗೊಂದು ಕಾನೂನಿದೆಯಾ..? ಕಾನೂನಿನ ಪ್ರಕಾರ ಅಪರಾಧಿ ಎಂದು ಘೋಷಿಸಲ್ಪಟ್ಟವನು ಯಾರೇ ಆದರೂ, ಎಂಥವನೇ ಆದರೂ ಆತನ ಬಗ್ಗೆ ಮೊಸಳೆ ಕಣ್ಣೀರು ಸುರಿಸಬೇಕಾ..? 20 ವರ್ಷಗಳ ನಂತರ ತೀರ್ಪು ಬಂದರೆ ಆರೋಪ ಹೊತ್ತವನ ಬೆಂಬಲಕ್ಕೆ ನಿಲ್ಲಬೇಕಾ..? ‘Justice is delayed is Justice denied ‘ ಅನ್ನೋ ಮಾತು ಸಲ್ಮಾನ್ ಖಾನ್ ನ ಹಿಟ್ ಅಂಡ್ ರನ್ ಕೇಸಿಗೆ, ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣಕ್ಕೆ ಅನ್ವಯವಾಗುವುದಿಲ್ಲವಾ..? ಮುಂಬೈ ದಾಳಿ ಸಂಚಿನ ಕೇಸ್ ನಲ್ಲಿ ಸಂಜಯ್ ದತ್ ಗೆ ಶಿಕ್ಷೆ ಘೋಷಿಸಿದಾಗಲೂ ಇದೇ ರೀತಿಯ ನಾಚಿಕೆಗೇಡಿನ ಅಭಿಯಾನ ನಡೆದಿತ್ತು. ಇವತ್ತು ಸಲ್ಮಾನ್ ಪರ ಅಭಿಯಾನ ಮಾಡುತ್ತಿರುವವರು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಎಂದಾದರೂ ತುಟಿಬಿಚ್ಚಿದ್ದಾರಾ..? ಇದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಶಿಕ್ಷೆ ವಿಧಿಸಲಾಗುತ್ತಿದೆ ಅನ್ನೋ ಆ್ಯಂಗಲ್ ಅನ್ನೂ ಕೂಡ ಹುಡುಕಿಬಿಟ್ಟಿದ್ದಾರೆ… ಥೂ ಇವರ ಜನ್ಮಕ್ಕಿಷ್ಟು.. ಇಲ್ಲಿಗೂ ಜಾತಿ-ಧರ್ಮ ಎಳೆತಂದುಬಿಟ್ಟರು. ರಾಜಕಾರಣಿಗಳಿಗೆ ಶಿಕ್ಷೆ ವಿಧಿಸಿದಾಗಲೂ ಷಡ್ಯಂತ್ರ, ರಾಜಕೀಯ ಅಂತಲೇ ವಾದಿಸಲಾಗುತ್ತೆ. ಹಾಗಾದ್ರೆ ಈ ದೇಶದ ಕಾನೂನು ಬಡವರು, ದುರ್ಬಲರಿಗೆ ಮಾತ್ರ ಶಿಕ್ಷೆ ವಿಧಿಸಬೇಕಾ..? ಸಲ್ಮಾನ್ ಖಾನ್ ಗೆ ಇರುವ ಬದುಕುವ ಹಕ್ಕು ಕೃಷ್ಣ ಮೃಗಕ್ಕಿರಲಿಲ್ಲವಾ..? ಅವತ್ತು ಫುಟ್ ಪಾತ್ ನಲ್ಲಿ ಪ್ರಾಣ ಬಿಟ್ಟ ಬಡವನಿಗಿರಲಿಲ್ಲವಾ..? #SalmanConvicted #JailForSalman #SalmanIsGuilty