
ಒಂದು ಕಡೆ ಹಿಂಬಾಗಿಲ ಮೂಲಕ ಉಗ್ರರನ್ನ ನುಗ್ಗಿಸಿ ಕಾಶ್ಮೀರದಲ್ಲಿ ಹಿಂಸೆಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿರುವ ಪಾಕಿಸ್ತಾನ ಮತ್ತೊಂದೆಡೆ ಪ್ರತ್ಯೇಕವಾದಿಗಳನ್ನೂ ಇದೇ ಕೃತ್ಯಕ್ಕೆ ಬಳಸಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಯಾವಾಗಲೂ ಅಸ್ಥಿರತೆ, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡಿ ಜಾಗತಿಕವಾಗಿ ಕಾಶ್ಮೀರ ಸಮಸ್ಯೆಯನ್ನ ಜೀವಂತವಾಗಿಡುವುದು ಪಾಕಿಸ್ತಾನದ ಕುತಂತ್ರ. ಉಗ್ರರನ್ನ ಗಡಿ ಮೂಲಕ ನುಸುಳಿಸುವುದು ಒಂದುಕಡೆಯಾದ್ರೆ, ಪ್ರತ್ಯೇಕತಾವಾದಿ ಹೋರಾಟಕ್ಕೆ ತುಪ್ಪ ಸುರಿಯುವುದು ಇನ್ನೊಂದು ಕಡೆ. ಇವತ್ತು ಕಾಶ್ಮೀರದಲ್ಲಿ ದಿನವೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಹಿಂದಿರುವ ಶಕ್ತಿ ಸೈಯದ್ ಆಲಿ ಷಾ ಗಿಲಾನಿ. ಪಾಕಿಸ್ತಾನದ ಅಧಿಕೃತ ಏಜೆಂಟ್. ಭಾರತದಲ್ಲೇ ಹುಟ್ಟಿ ಬೆಳೆದಿದ್ದರೂ ಈತನ ನಿಷ್ಠೆ ಮಾತ್ರ ಶತೃ ರಾಷ್ಟ್ರದ ಮೇಲೆ. ಪಾಕಿಸ್ತಾನ ಗಿಲಾನಿಯನ್ನ ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ಬಳಸಿಕೊಳ್ಳುತ್ತಿದೆ. ಆ ಮೂಲಕ ಕಾಶ್ಮೀರ ವಿವಾದವನ್ನ ಜಾಗತಿಕವಾಗಿ ಜೀವಂತವಾಗಿಡುವ ಪ್ರಯತ್ನ ಪಾಕಿಸ್ತಾನದ್ದು. ಕಾಶ್ಮೀರದ ಈ ಗಿಲಾನಿಗೆ ಪಾಕ್ ಐ ಎಸ್ ಐ ನ ಕುಮ್ಮಕ್ಕು ಎಷ್ಟರ ಮಟ್ಟಿಗೆ ಇದೆ ಅಂದ್ರೆ ಈತ ಬಹಿರಂಗವಾಗಿಯೇ ನಾನು ಭಾರತೀಯನಲ್ಲ ಎಂದು ಹೇಳಿಕೊಳ್ಳುತ್ತಾನೆ. ಕಾಶ್ಮೀರದಲ್ಲಿ ಪಾಕ್ ಪರ ರ್ಯಾಲಿಗಳು, ಸಮಾವೇಶಗಳನ್ನ ನಡೆಸಲು ಲಕ್ಷಾಂತರ ರೂಪಾಯಿ ಹಣವನ್ನ ಪಾಕಿಸ್ತಾನದ ಸರ್ಕಾರ ಈ ಗಿಲಾನಿಗೆ ನೀಡುತ್ತದೆ. ಕಾಶ್ಮೀರದಲ್ಲಿನ ನಿರುದ್ಯೋಗಿ ಯುವಕರಿಗೆ ಹಣ ಮತ್ತು ದರ್ಮಯುದ್ಧದ ಆಮಿಷ ತೋರಿಸಿ ಪಾಕ್ ಪರ ಹೋರಟ, ಘೋಷಣೆಗಳನ್ನ ಕೂಗಲು ಬಳಸಿಕೊಳ್ಳುತ್ತಾನೆ. ಒಂದು ದಿನದ ರ್ಯಾಲಿಗೆ ಈತ ಕಾಶ್ಮೀರದಲ್ಲಿನ ನಿರುದ್ಯೋಗಿ ಯುವಕರುಗಳಿಗೆ ಐನೂರು ರೂಪಾಯಿಯಷ್ಟು ಇನಾಮು ಕೊಡುತ್ತಾನೆ. ಗಿಲಾನಿ ಕೊಡುವ ಐನೂರು ರೂಪಾಯಿಗಳನ್ನ ಪಡೆದ ಯುವಕರು ಪೊಲೀಸರು ಮತ್ತು ಭಾರತೀಯ ಸೇನೆಯ ಮೇಲೆ ಕಲ್ಲು ತೂರಾಟ ನಡೆಸಿ ಅಶಾಂತಿಯ ವಾತಾವರಣವನ್ನ ಸೃಷ್ಟಿಸುತ್ತಾರೆ. ಇಷ್ಟು ಸಾಕು ಪಾಕಿಸ್ತಾನಕ್ಕೆ ಕಾಶ್ಮೀರ ಸಮಸ್ಯೆಯನ್ನ ಜಗತಿಕವಾಗಿ ಜೀವಂತವಾಗಿಡಲು. ಈಗಾಗಲೇ ಪಾಕಿಸ್ತಾನ ಕಾಶ್ಮೀರದ 30 ರಷ್ಟು ಭಾಗವನ್ನ ವಶಪಡಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಿರೋಧಿ ಭಯೋತ್ಪಾದನಾ ಕೃತ್ಯಗಳಿಗೆ ಅಲ್ಲಿ ಕುಮ್ಮಕ್ಕು ನೀಡಲಾಗುತ್ತಿದೆ. ಇನ್ನು ಕಾಶ್ಮೀರದ ಹತ್ತರಷ್ಟು ಭೂ ಭಾಗ ಚೀನಾದ ಪಾಲಾಗಿದೆ. ಈ ದೇಶ ಕಂಡ ಉತ್ತಮ ಪ್ರಧಾನಿ ನೆಹರು(!?) ಕಾಲದಲ್ಲಿ ಅಂದರೆ 1962 ರ ಯುದ್ಧದಲ್ಲಿ ಚೀನಾ ಕಾಶ್ಮೀರದ ಹತ್ತರಷ್ಟು ಭೂಮಿಯನ್ನ ವಶಪಡಿಸಿಕೊಂಡಿದೆ. ಅವತ್ತಿನ ಯುದ್ಧದಲ್ಲಿ ಭಾರತೀಯ ಯೋಧರಿಗೆ ಚೀನಾ ವಿರುದ್ಧ ಹೋರಾಡುವ ಶಕ್ತಿಯೂ ಇಲ್ಲದಂತೆ ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತೆ. ಈಗ ಉಳಿದಿರುವ ಅರವತ್ತರಷ್ಟು ಕಾಶ್ಮೀರವನ್ನ ಪಾಕಿಸ್ತಾನದ ಮಡಿಲಿಗೆ ಬಸಿದುಬಿಡಲು ನಿಂತಿದ್ದಾನೆ ಈ ಸೈಯದ್ ಆಲಿ ಷಾ ಗಿಲಾನಿ. ದೇಶವನ್ನಾಳಿದ ಯಾವ ಸರ್ಕಾರಗಳು ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನ ಮನವೊಲಿಸುವುದಾಗಲೀ, ದಿಟ್ಟತನದಿಂದ ಎದರಿಸುವುದಾಗಲೀ ಎರೆಡನ್ನೂ ಮಾಡಲಿಲ್ಲ. ಬದಲಾಗಿ ಮಾಡಿದ್ದು ಮಾತ್ರ ಓಲೈಕೆ ರಾಜಕಾರಣ. ಮುಸ್ಲೀಮರ ಪ್ರಾಬಲ್ಯವೇ ಹೆಚ್ಚಿರುವ ಕಾಶ್ಮೀರದಲ್ಲಿ ಈಗ ಕಾಶ್ಮೀರೀ ಪಂಡಿತರನ್ನ ಬೂದುಗನ್ನಡಿಯಾಕಿ ಹುಡುಕಬೇಕಾದ ಪರಿಸ್ಥಿತಿ ಇದೆ. ನಿರಂತರ ಹಿಂಸಾಚಾರದಿಂದ ಬೇಸತ್ತ ಕಾಶ್ಮೀರಿ ಪಂಡಿತರೆಲ್ಲರೂ ಜಮ್ಮು ಭಾಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಜಮ್ಮು ಹಿಂದೂ ಗಳ ಪ್ರಾಬಲ್ಯವುಳ್ಳ ಪ್ರದೇಶವಾದರೆ, ಕಾಶ್ಮೀರ ಮುಸ್ಲಿಂ ಬಲವುಳ್ಳ ಪ್ರದೇಶ. ಹೇಗಾದರೂ ಮಾಡಿ ಕಾಶ್ಮೀರವನ್ನ ಪಾಕಿಸ್ತಾನ ಪಡೆಯಲೇಬೇಕೆಂಬ ಹಟಕ್ಕೆ ಸ್ವಾತಂತ್ರ್ಯ ಕಾಲದಿಂದಲೂ ಯತ್ನಿಸುತ್ತಲೇ ಇದೆ. ಹಲವು ಭಾರೀ ನೇರವಾಗಿ ಯುದ್ಧಕ್ಕೆ ಬಂದು ಸೋತು ಶರಣಾಗಿದ್ದ ಪಾಕಿಸ್ತಾನ ಹಿಂಬಾಗಿಲ ಮೂಲಕ ಭಯೋತ್ಪಾದಕರನ್ನ ಗಡಿಯಲ್ಲಿ ನುಗ್ಗಿಸಿ ಅಮಾಯಕರ ರಕ್ತ ಹೀರುತ್ತಿದೆ. ಒಂದೆಡೆ ಭಯೋತ್ಪಾದಕರ ಅಟ್ಟಹಾಸ, ಮತ್ತೊಂದೆಡೆ ಪ್ರತ್ಯೇಕತಾವಾದಿಗಳ ಅಬ್ವರದ ನಡುವೆ ಕಾಶ್ಮೀರದ ಜನ ನಲುಗಿರುವುದಂತೂ ನಿಜ. ಕಳೆದ ವರ್ಷ ನಡೆದ ಜಮ್ಮ ಕಾಶ್ಮೀರ ಚುನಾವಣೆಯನ್ನ ಬಹಿಷ್ಕರಿಸಲು ಪ್ರತ್ಯೇಕತಾವಾದಿ ದೇಶ ದ್ರೂಹಿಗಳು ಕರೆ ನೀಡಿದಾಗ ಜಮ್ಮು ಮತ್ತು ಕಾಶ್ನೀರದ ಜನತೆ ಅದನ್ನ ದಿಕ್ಕರಿಸಿ ಮತದಾನವಾಗಿತ್ತು. ಇದು ಕಾಶ್ಮೀರದ ಜನರಿಗೆ ಬೇಕಿರುವುದು ಶಾಂತಿಯೇ ಹೊರತು ಪಾಕಿಸ್ತಾನದ ಮೇಲಿನ ಪ್ರೀತಿಯಲ್ಲ ಅನ್ನೋದು ಸ್ಪಷ್ಟವಾಗಿತ್ತು. ಕಾಶ್ಮೀರದಲ್ಲಿರುವ ಬಹುತೇಕ ಮುಸ್ಲಿಮರಿಗೆ ತಾವು ಭಾರತೀಯರಾಗಿರಲು ಯಾವುದೇ ಅಭ್ಯಂತರವಿಲ್ಲ. ಆದ್ರೆ ಅಲ್ಲಿರುವ ಕೆಲವು ಪ್ರತ್ಯೇಕತಾವಾದಿಗಳು ಕಾಶ್ಮೀರಿ ಜನತೆಯನ್ನ ತಪ್ಪುದಾರಿಗೆಳೆಯುತ್ತಿದ್ದಾರೆ. ಅದ್ರಲ್ಲಿ ಹುರಿಯತ್ ಕಾನ್ಫರೆನ್ಸ್ ಒಕ್ಕೂಟದ ನಾಯಕರದ್ದೇ ಪ್ರಧಾನ ಪಾತ್ರ. ಸೈಯದ್ ಆಲಿ ಷಾ ಗಿಲಾನಿ, ಮಸರತ್ ಆಲಂ, ಅನು ಅಂದರಾಬಿ ಇವರೆಲ್ಲರಿಗೂ ಪಾಕಿಸ್ತಾನದ ಮೇಲೆ ಅದೇನೋ ವ್ಯಾಮೋಹ. ಪಾಕಿಸ್ತಾನ ಇಂತಹ ಪ್ರತ್ಯೇಕತಾವಾದಿ ಮುಖಂಡರನ್ನ ಹಣ, ಆಮಿಷ ತೋರಿಸಿ ಬಳಸಿಕೊಳ್ಳುತ್ತಿದೆ. ತನ್ನ ದೇಶದ ಆಂತರಿಕ ಪರಿಸ್ಥಿತಿಯನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪರದಾಡುತ್ತಿರುವ ವಿಪಲ ದೇಶ ಪಾಕಿಸ್ತಾನಕ್ಕೆ ಕಾಶ್ಮೀರ ಭಾರತದಿಂದ ಸ್ವಾತಂತ್ರ್ಯ ಪಡೆದು ಪಾಕಿಸ್ತಾನಕ್ಕೆ ಸೇರಬೇಕಂತೆ. ಸ್ವಾಂತಂತ್ರ್ಯ, ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲದ ಭಯೋತ್ಪಾದಕ ದೇಶವೊಂದು ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತದೆ. ಹುರಿಯತ್ ಕಾನ್ಫರೆನ್ಸ್ ನ ಮುಖಂಡ ತಾನು ಭಾರತೀಯನಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡು ಈಗ ನಾಚಿಕೆಯಿಲ್ಲದೆ ಭಾರತದ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾನೆ. ಭಾರತೀಯನಲ್ಲದ ಮೇಲೆ ಈತನಿಗೆ ಭಾರತದ ಪಾಸ್ ಪೋರ್ಟ್ ಆದರೂ ಯಾಕೆ ಬೇಕು ಅನ್ನೋದು ಈಗಿನ ಪ್ರಶ್ನೆ. ಈ ಸೈಯದ್ ಆಲಿ ಷಾ ಗಿಲಾನಿಗೆ ಈ ರೀತಿಯ ವಿವಾದಗಳೇನೂ ಹೊಸದೇನಲ್ಲ. ಪದೇ ಪದೇ ಭಾರತದ ನೆಲದಲ್ಲಿ ನಿಂತು ಶತೃ ರಾಷ್ಟ್ರದ ಪರವಾಗಿ ಮಾತನಾಡುವ ಈತ ಬಿನ್ ಲಾಡೆನ್ ನನ್ನ ಅಮೇರಿಕಾ ಬೇಟೆಯಾಡಿದಾಗ ಆತನನ್ನ ಹುತಾತ್ಮ ಎಂದು ಕರೆದಿದ್ದ. ಇನ್ನು ದೇಶದ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ್ದ ಅಫ್ಜಲ್ ಗುರು ಮಹಾನ್ ದೇಶಪ್ರೇಮಿ ಅಂತ ಗಂಟೆಗಟ್ಟಲೆ ಭಾಷಣ ಭಿಗಿಯುತ್ತಿದ್ದ. ತಿಹಾರ್ ಜೈಲಿನಲ್ಲಿ ಮರಣದಂಡನೆಗೆ ಗುರಿಯಾದ ಅಫ್ಜಲ್ ಗುರು ಮೃತದೇಹವನ್ನ ಆತನ ಕುಟುಂಬಕ್ಕೆ ನೀಡಬೇಕು. ಜೈಲಿನ ಆವರಣದಲ್ಲೇ ಆತನ ಅಂತ್ಯ ಸಂಸ್ಕಾರ ಮಾಡಿರೋದು ಮಾನವ ಹಕ್ಕುಗಳ ಉಲ್ಲಂಘನೆ ಅಂತ ವಾದ ಮಂಡಿಸಿದ್ದ. ಪ್ರಜಾಪ್ರಭುತ್ವದ ದೇಗುಲಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದವನಿಗೆ ಮಾನವೀಯತೆಯ ಲವಲೇಷವೂ ಇರಲಿಲ್ಲ. ಆದ್ರೆ ಈ ಗಿಲಾನಿ ಮಾತ್ರ ಮಾನವಹಕ್ಕುಹಳ ಬಗ್ಗೆ ಬನಾಷಣ ಭಿಗಿಯುತ್ತಾನೆ. ಇನ್ನು ಮುಂಬೈ ದಾಳಿಯ ಸಂಚುಕೋರ ಹಫೀಸ್ ಸೈಯದ್ ಪರವಾಗಿ ಬಹಿರಂಗವಾಗಿಯೇ ಮಾತನಾಡುತ್ತಾನೆ. ಅಂತರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಫೀಸ್ ಸೈಯದ್ ನ ಜಮಾತ್ ಉದ್ ದಾವಾ ಸಂಘಟನೆಯನ್ನ ನಿಷೇಧಿಸುವ ನಿರ್ಧಾರ ಪ್ರಕಟಿಸಿತ್ತು. ಆಗ ಈ ಗಿಲಾನಿ ಹೇಳಿದ್ದೇನು ಗೊತ್ತಾ..? ಜಮಾತ್ ಉದ್ ದಾವಾ ಸಮಾಜಸೇವೆ ಮಾಡುತ್ತಿರುವ ಸಂಘಟನೆ, ಅದನ್ನ ನಿಷೇಧ ಮಾಡಿದ್ದು ತಪ್ಪು ನಿರ್ಧಾರ ಅಂತ. ಲಷ್ಕರ್ ಎ ತೋಯಿಬಾದ ಮತ್ತೊಂದು ಮುಖ ಈ ಜಮಾತ್ ಉದ್ ದವ ಸಂಘಟನೆ. ಈ ಸತ್ಯ ಜಗತ್ತಿಗೇ ಗೊತ್ತಿದ್ದರೂ ಅದು ಗಿಲಾನಿಗೆ ಮಾತ್ರ ಗೊತ್ತಿಲ್ಲವೇನೋ. ಗೊತ್ತಿಲ್ಲದಂತೇನು ಇಲ್ಲ, ಈತ ಭಾರತದ ನೆಲದಲ್ಲಿರುವ ಮತ್ತೋಬ್ಬ ಹಪೀಸ್ ಸೈಯದ್ ಅಷ್ಟೇ. ಈ ಸೈಯದ್ ಆಲಿ ಷಾ ಗಿಲಾನಿ ಮೂರು ಬಾರಿ ಜಮ್ಮು ಮತ್ತು ಕಾಶ್ಮೀರದ ಶಾಸಕನಾಗಿಯೂ ಆಯ್ಕೆಯಾಗಿದ್ದ. ಈಗ ಅಲ್ಲಿನ ಜನರನ್ನ ತಪ್ಪುದಾರಿಗೆಳೆದು ಪಾಕ್ ಪ್ರಾಯೋಜಿತ ಹೋರಾಟಗಳಿಗೆ ಜನರನ್ನ ಹುರಿದುಂಬಿಸುತ್ತಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರ ಬಂದ ಮೇಲಂತೂ ಪಾಕ್ ಪರವಾದ ಹೋರಾಟಗಳು ಹೆಚ್ಚು ಹೆಚ್ಚು ನಡೆಯುವಂತೆ ನೋಡಿಕೊಳ್ಳುತ್ತಿದ್ದಾನೆ. ಆ ಮೂಲಕ ಕಾಶ್ಮೀರದಲ್ಲಿ ಅಸ್ಥಿರತೆ ಮೂಡಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಸಹಕಾರ ನೀಡುತ್ತಿದ್ದಾನೆ. ಪೀಪಲ್ ಡೆಮಾಕ್ರೆಟಿಕ್ ಪಾರ್ಟಿ ಈ ಪ್ರತ್ಯೇಕತಾವಾದಿಗಳ ಬಗ್ಗೆ ತಳೆದಿರುವ ಮೃದು ದೋರಣೆ ಪ್ರತ್ಯೇಕವಾದಿಗಳಿಗೆ ಅಲ್ಪಮಟ್ಟಿಗೆ ಬಲತಂದಿರುವುದು ಮಾತ್ರ ಸುಳ್ಳಲ್ಲ. ಸ್ವಾತಂತ್ರ್ಯಾ ನಂತರ ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಗೆ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗಲೇ ಇಲ್ಲ. ಅದು ಕಾಂಗ್ರೆಸ್ ಗೆ ಬೇಕಾಗಿಯೂ ಇರಲಿಲ್ಲ ಅನ್ನೋದು ಬೇರೆ ಮಾತು. ಇನ್ನು ದೇಶವನ್ನಾಳಿದ ಜನತಾ ಪರಿವಾರ, ಮತ್ತು ಅಟಲ್ ಸರ್ಕಾರಗಳೂ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಕೆಲ ಪ್ರಯತ್ನಗಳನ್ನ ಮಾಡಿದವಾದರೂ ಅವು ಯಶಸ್ವಿಯಾಗಲಿಲ್ಲ. ಬಹುಮತದ ಆಧಾರದ ಮೇಲೆ ಹೇಳುವುದಾದರೆ ಈಗ ಕೇಂದ್ರದಲ್ಲಿರೋದು ಬಲಿಷ್ಠ ಸರ್ಕಾರ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಪ್ರತ್ಯೇಕತಾವಾದಿಗಳ ಮನವೊಲಿಸಬೇಕಿದೆ. ಇನ್ನೂ ಕಟ್ಟಾ ಪಾಕಿಸ್ತಾನದ ಏಜೆಂಟ್ ಗಳಾದ ಸೈಯದ್ ಆಲಿ ಷಾ ಗಿಲಾನಿ ಮತ್ತು ಮಸರತ್ ಆಲಂ ಅಂತಹ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ಅಂತಹ ಒಂದು ಅವಕಾಶ ಮೋದಿ ಸರ್ಕಾರದ ಮುಂದಿದೆ. ಮೊದಲು ಗಿಲಾನಿಗೆ ಪಾಸ್ ಪೋರ್ಟ್ ನಿರಾಕರಿಸುವ ದಿಟ್ಟ ನಿರ್ಧಾರ ಕೈಗೊಳ್ಳುವುದು. ಆ ಮೂಲಕ ಕಟ್ಟಾ ಪ್ರತ್ಯೇಕವಾದಿಗಳಿಗೆ ಕಾನೂನಿನ ಅಡಿಯಲ್ಲಿ ದೇಶದ ವಿರುದ್ಧ ಯುದ್ಧ ಮಾಡಿದ ಆರೋಪ ಹೊರಿಸಿ ಸೆರೆಮನೆಗೆ ತಳ್ಳಬೇಕು. ಆ ನಂತರ ಕಾಶ್ಮೀರದ ಜನರ ಮನವೊಲಿಸಿ ಅವರನ್ನ ದೇಶದ ಅಭಿವೃದ್ಧಿಗೆ ಬಳಸಿಕೊಂಡು ಒಟ್ಟಿಗೆ ಮುನ್ನಡೆಯುವುದು. ಇದನ್ನ ಮೋದಿ ಸರ್ಕಾರ ಮಾಡಿದ್ದೇ ಆದರೆ ಈ ದೇಶದ ಜನರು ಈ ಸರ್ಕಾರವನ್ನ ಎಂದಿಗೂ ಮರೆಯುವುದಿಲ್ಲ. ಅಂತಹ ದಿಟ್ಟತನವನ್ನ ಅಚ್ಚೇ ದಿನ್ ಸರ್ಕಾರ ಪ್ರದರ್ಶಿಸುವ ಅಗತ್ಯತೆ ಇದೆ. ಹಾಗೊಂದು ವೇಳೆ ಇದು ಸಾಧ್ಯವಾಗಿದ್ದೇ ಆದರೆ ಅದು ಇತಿಹಾಸ ಸೃಷ್ಟಿ ಗೆ ಕಾರಣವಾಗಿತ್ತದೆ. ಇಲ್ಲವಾದರೆ ದೇಶವನ್ನಾಳಿದ ಕಾಂಗ್ರೆಸ್ ಗಿಂತ ಬಿಜೆಪಿ ಭಿನ್ನವಲ್ಲ ಅನ್ನೋದು ಸಾಭೀತಾಗುತ್ತದೆ…
-ಶಶಿವರ್ಣಂ
-ಶಶಿವರ್ಣಂ
Like this:
Like ಲೋಡ್ ಆಗುತ್ತಿದೆ...