ಗಣೇಶ ನಿಮ್ ಫ್ರೆಂಡ್ ಆಗ್ಬೇಕು ಅಂದ್ರೆ ಮೊದಲು ನೀವು ಇಕೊ ಫ್ರೆಂಡ್ಲಿ ಆಗಿ…….
ಸೆಪ್ಟೆಂಬರ್ 7, 2013 ನಿಮ್ಮ ಟಿಪ್ಪಣಿ ಬರೆಯಿರಿ
ಗಣೇಶನ ಹಬ್ಬಕ್ಕೆ ಆಗಲೇ ಕ್ಷಣಗಣನೆ ಆರಂಭವಾಗಿದೆ. ಬೀದಿಬೀದಿಗಳಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡೋಕೆ ಅಂತ ಯುವಕರ ಗುಂಪು ಮೈಕೊಡವಿ ನಿಂತಿವೆ. ಇನ್ನು ಮನೆಗಳಲ್ಲಿ ಗಣೇಶನ ಮೂತರ್ಿಯನ್ನಿಟ್ಟು ಪೂಜಿಸುವವರೂ ಕೂಡ ಗಣೆಶನನ್ನ ಮನೆಗೆ ಸ್ವಾಗತಿಸಲು ಸಂಭ್ರಮದಿಂದ ಕಾಯ್ತಾಯಿದ್ದಾರೆ. ವಿಗ್ನ ವಿನಾಶಕನಾದ ಗಣೇಶ ಯಾಕೊ ಇತ್ತೀಚಿನ ದಿನಗಳಲ್ಲಿ ಸ್ವತಃ ವಿಗ್ನಕಾರಕನಾಗಿಬಿಟ್ಟಿದ್ದಾನೆ. ಅದಕ್ಕೆ ಕಾರಣ ಪ್ಲಾಸ್ಟರ್ ಆಫ್ ಪ್ಯಾರೀಸ್, ಥಮರ್ೋಕೋಲ್ ನಿಂದ ತಯಾರಿಸಲಾಗುತ್ತಿರುವ ಮೂತರ್ಿಗಳು. ಇತ್ತೀಚೆಗಂತೂ ಎಂತೆತಾ ಗಣೇಶನ ವಿಗ್ರಹಗಳನ್ನ ಇಡ್ತಾರಂದ್ರೆ ತಾಲಿಬಾನ್ ಗಣೇಶ, ಲಾಡೆನ್ ಗಣೇಶ, ಉಪೇಂದ್ರನ ಅವತಾರದ ಗಣೇಶ, ಗಾಂದೀಜಿಯ ಗಣೇಶ, ಅಣ್ಣಾ ಹಜಾರೆಯ ಗಣೇಶ, ಬಂದೂಕು ಹಿಡಿದಿರುವ ಗಣೇಶ, ಹರುಕು ಪ್ಯಾಂಟಿನ ಗಣೇಶ ಹೀಗೆ ತಮಗೆ ತೋಚಿದ ರೀತಿ ವಿಚಿತ್ರ ಗಣೇಶಗಳನ್ನ ಇಡ್ತಾರೆ. ಈ ರೀತಿಯ ಗಣೇಶನ ಮೂತರ್ಿಗಳನ್ನ ನೋಡಿದ ಹಿರಿಯರು ಎಂತಾ ಕಾಲ ಬಂತಪ್ಪಾ ಅಂತ ತಲೆತಲೆ ಚೆಚ್ಚಿ ಕೊಳ್ತಾಯಿದ್ದಾರೆ. ನೊಡಲು ಆಕರ್ಷಕವಾಗಿ ಕಾಣೋದ್ರಿಂದಾಗಿ ಆರಂಭದಲ್ಲಿ ಜನ ಪ್ಲಾಸ್ಟರ್ ಆಫ್ ಪ್ಯಾರೀಸ್, ಥಮರ್ೋಕೋಲ್ ನಿಂದ ತಯಾರಿಸುವ ವಿಗ್ರಹಗಳನ್ನ ಮುಗಿಬಿದ್ದು ಕೊಂಡು ಮನೆಯಲ್ಲಿ, ಬೀದಿ ಬೀದಿಗಳಲ್ಲಿ ಕೂರಿಸಿ ಸಂಭ್ರಮಿಸಿದ್ರು. ಆದ್ರೆ ಇತ್ತೀಚೆಗೆ ಈ ರೀತಿಯ ಪ್ರಕೃತಿಗೆ ಮಾರಕವಾದ ಗಣೇಶಗಳ ಬಳಕೆ ಹೆಚ್ಚುತ್ತಾ ಇರೋದ್ರಿಂದಾಗಿ ಪ್ರಕೃತಿ ಪ್ರಿಯ ಗಣೇಶ ಪ್ರಕೃತಿಗೆ ಮಾರಕನಾಗುತ್ತಿದ್ದಾನೆ.
ಇತ್ತೀಚೆಗೆ ಡಿಸೈನ್ ಡಿಸೈನ್ ಗಣೇಶಗಳ ಆರ್ಭಟ ಆರಂಭವಾದ ಮೇಲೆ ಮಣ್ಣಿನ ಗಣೇಶಗಳು ಮೂಲೆಗುಂಪಾಗಿಬಿಟ್ಟಿವೆ. ಪ್ಲಾಸ್ಟರ್ ಆಫ್ ಪ್ಯಾರೀಸ್, ಥಮರ್ೋಕೋಲ್ ಗಳಿಂದ ತಯಾರಿಸಲಾದ ಗಣೆಶನ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಇದ್ರ ಜೊತೆಗೆ ಈ ರೀತಿಯ ವಿಗ್ರಹಗಳಲ್ಲಿ ಬಳಸಲಾಗುವ ರಾಸಾಯನಿಕ ಬಣ್ಣಗಳೂ ಕುಡ ವಿಸರ್ಜನೆ ಮಾಡುವಾಗ ನೀರು ಸೇರುತ್ತವೆ. ಪರಿಣಾಮ ನೀರೂ ಮಾಲಿನ್ಯವಾಗುತ್ತದೆ. ಇದ್ರ ಜೊತೆಗೆ ನೀರಿನಲ್ಲಿರುವ ಜಲಚರಗಳಿಗೂ ಹಾನಿ ತಪ್ಪಿದ್ದಲ್ಲ. ಹಾಗಾಗಿ ಜನರು ಪರಿಸರ ಸ್ನೇಹಿ ಗಣೇಶನನ್ನ ಪೂಜಿಸಿದ್ರೆ ನಾವೂ ಪರಿಸರ ಉಳಿಸೋದಕ್ಕೆ ಒಂದೇ ಒಂದು ಸಣ್ಣ ಸಹಕಾರ ನೀಡಿದಂತಾಗುತ್ತದೆ.
ಗಣೇಶನ ಪುನರ್ಜನ್ಮದ ಕತೆ ಎಲ್ಲರಿಗೂ ಗೊತ್ತಿರುವಂತದ್ದೇ. ಆನೆಯ ಮುಖವನ್ನ ದರಿಸಿಕೊಂಡು ಗಣೇಶನಿಗೆ ಈಶ್ವರ ಅಗ್ರಪೂಜೆಯ ವರವನ್ನೂ ನೀಡಿದ. ಗಣೇಶನನ್ನ ಪಕೃತಿ ಪ್ರಿಯ, ಪ್ರಾಣಿ ಪಕ್ಷಿಗಳ ಸಂರಕ್ಷಕ ಅಂತಲೇ ಅನಾದಿ ಕಾಲದಿಂದಲೂ ಪೂಜಿಸಿಕೊಂಡು ಬರಲಾಗುತ್ತಿದೆ. ಆನೆಯ ಮುಖದ ಗಣೆಶ ಪ್ರಕೃತಿಯ ಸಂಕೇತ. ಹಾಗಾಗಿ ಕೆರೆ, ಕಟ್ಟೆ, ಹೊಂಡಗಳ ಬಳಿ ಸಿಗುವ ಜೇಡಿ ಮಣ್ಣಿನಿಂದ ಗಣೇಶನ ಮೂತರ್ಿಗಳನ್ನ ತಯಾರಿಸಿ, ಪೂಜಿಸಿ ನಂತ್ರ ವಿಸರ್ಜನೆ ಮೂಲಕ ಮತ್ತೆ ಪಕೃತಿಗೇ ಮೂತರ್ಿಯನ್ನ ಮರಳಿಸ್ತಾಯಿದ್ದದ್ದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಕೆರೆಯಿಂದ ಮಣ್ಣನ್ನ ತಂದು ಮೂತರ್ಿಯನ್ನ ನಿಮರ್ಿಸಿ, ಪೂಜೆ ಮಾಡಿದ ನಂತರ ವಿಗರಹವನ್ನ ಕರೆಯಲ್ಲಿ ವಿಸಜರ್ಿಸುವುದು ಪ್ರಕೃತಿಯ ಪೂಜೆಯೇ ಆಗಿತ್ತು. ಮಣ್ಣಿನ ಗಣಪತಿಯ ಪೂಜೆ ಆರಮಭವಾಗುವುದಕ್ಕೂ ಮೊದಲು ಸಗಣಿಯಲ್ಲಿ ಗರಿಕೆ ಹುಲ್ಲನ್ನ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಈಗಲೂ ಕೂಡ ಗಣೇಶನ ಮೂತರ್ಿ ಎಷ್ಟೇ ಉದ್ದವಿರಲಿ ಅದರ ಪಕ್ಕ ಸಗಣಿ ಮತ್ತು ಗರಿಕೆ ಹುಲ್ಲಿನ ಗಣಪನನ್ನ ಪೂಜೆ ಮಾಡಲಾಗುತ್ತದೆ. ಪ್ರಕೃತಿ ಪ್ರಿಯ ಗಣೇಶನನ್ನ ಪ್ರಕೃತಿ ಸ್ನೇಹಿ ಮಣ್ಣು ಮತ್ತು ಸಗಣಿಯಿಮದ ಪೂಜಿಸಿದರೇ ಶ್ರೇಷ್ಠ ಅಂತಾರೆ ದಾಮರ್ಿಕ ಕ್ಷೇತ್ರದ ಹಿರಿಯರು.
ಪರಿಸರ ಸ್ನೇಹಿ ಗಣೇಶನ ವಿಗ್ರಹವನ್ನ ಜೇಡಿ ಮಣ್ಣಿನಿಂದ ತಯಾರಿಸಿ ಅದಕ್ಕೆ ನೈಸಗರ್ಿಕವಾದ ಬಣ್ಣಗಳನ್ನೇ ಲೇಪಿಸಬಹುದು. ಗಂಧ, ಅಶ್ವಗಂಧ, ಕೇಸರಿ, ಚಂದನ , ಬೇವಿನ ರಸ, ಅರಿಷಿಣ, ಕುಂಕುಮ, ಗಿಡದ ಲೋಳೆ ರಸ ಇತ್ಯಾದಿಗಳನ್ನ ಬಳಸಿ ಪ್ರಕೃತಿ ಸ್ನೇಹಿಯಾದ ಕಲರ್ ಕಲರ್ ಗಣೇಶನ ವಿಗ್ರಹಗಳನ್ನ ತಯಾರಿಸಬಹುದು. ಈ ರೀತಿಯ ಗಣೇನ ಮೂತರ್ಿ ಗಳನ್ನ ಪೂಜಿಸೋದ್ರಿಂದಾಗಿ ಗಣೇಶನನ್ನ ಪ್ರಕೃತಿ ಪ್ರಿಯನನ್ನಾಗಿ ಮತ್ತೆ ಮಾಡಬೇಕಾಗಿದೆ. ಇನ್ನು ಚಿಕ್ಕ ಚಿಕ್ಕ ಗಣೇಶನ ಮೂತರ್ಿಗಳನ್ನ ಇಟ್ಟು ಮನೆಯ ಬಳಿಯೇ ಬಕೆಟ್ ಗಳಲ್ಲಿ ವಿಸಜರ್ಿಸಿ ಆ ನೀರನ್ನ ಗಿಡಗಳಿಗೆ ಹಾಕೋದ್ರಿಂದಲೂ ಪರಿಸರ ಸ್ನೇಹಿಯಾಗಿ ಗಣೇಶನ ಹಬ್ಬವನ್ನ ಆಚರಿಸಬಹುದು. ಗಣೇಶನ ಮೂತರ್ಿಯನ್ನ ವಿಸರ್ಜನೆ ಮಾಡುವಾಗ ಹೂವು, ಬಾಲೆ ಎಲ್ಲವನ್ನೂ ಕೆರೆಗೆ ಎಸೆಯೋದ್ರಿಮದ ಅವು ನೀರಿನಲ್ಲಿ ಕೊಳೆತು ನೀರು ಮಲಿನವಾಗುತ್ತದೆ. ಹಾಗಾಗಿ ಗಣೆಶನನ್ನ ವಿಸಜರ್ಿಸುವಾಗ ಅವುಗಳನ್ನ ತೆಗೆದಿಟ್ಟು ವಿಸಜರ್ಿಸಿ.
ಇನ್ನು ಗಣೇಶನನ್ನ ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪನೆ ಮಾಡಿದ ನಂತ್ರ ಮೈಕಾಸುರರ ಆವಳಿಯೇನೂ ಕಡಿಮೆ ಇರೋದಿಲ್ಲ. ಯಾವ ಬಿದಿಯಲ್ಲಿ ನೋಡಿದ್ರೂ ಸಿನೆಮಾ ಹಾಡುಗಳನ್ನ ಹಾಕಿಕೊಂಡು ಟಪಾಂಗುಚ್ಚಿ ಸ್ಟೆಪ್ ಹಾಕೋದು ಎಲ್ಲೆಲ್ಲೂ ಕಾಮನ್. ಇದ್ರ ಜೊತೆಗೆ ಆರ್ ಕೆಸ್ಟ್ರಾ ಗಳವರೂ ಕೂಡ ಸಿನಿಮಾ ಹಾಡುಗಳನ್ನ ತಮ್ಮ ಕೆಟ್ಟ ಕಂಠಗಳಲ್ಲೇ ತಾವೊಬ್ಬ ಮಹಾನ್ ಗಾಯಕರಂತೆ ಪೋಸ್ ಕೊಡ್ತಾ ಹಾಡೋಕೆ ನಿಂತುಬಿಡ್ತಾರೆ. ಭಯಂಕರವಾಗಿ ಸೌಂಡ್ ಕೊಟ್ಟು ಅದು ಇಡೀ ಊರಿಗೇ ಕೇಳಿಸಿವಂತೆ ಮಾಡಿ ಯಾಕಾದ್ರೂ ಗಣೇಶನನ್ನ ಕೂರಿಸ್ತಾರೋ ಅಂತ ಎಲ್ಲರೂ ಶಪಿಸುವಂತೆ ಮಾಡಿಕೊಳ್ಳುವುದನ್ನ ಬಿಟ್ಟು ಕಡಿಮೆ ಶಬ್ದದಲ್ಲಿ ದೇವರ ಹಾಡನ್ನ ಹಾಕಿದ್ರೆ ಗಣೇಶನನ್ನ ಇಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಪರಿಸರ ಮಾಲೀನ್ಯದ ಜೊತೆಗೆ ಶಬ್ದ ಮಾಲೀನ್ಯವನ್ನೂ ತಡೆದು ಆ ಮೂಲಕ ಪರಿಸರ ಸ್ನೇಹಿ ಹಬ್ಬವನ್ನ ಆಚರಿಸಿ ಸಂಭ್ರಮಿಸಬಹುದು. ಗಣೇಶ ನಿಮ್ಮ ಫ್ರೆಂಡ್ ಆಗ್ಬೇಕು ಅಂದ್ರೆ ಅದಕ್ಕೂ ಮೊದಲು ನೀವು ಇಕೊ ಫ್ರೆಂಡ್ಲಿ ಆಗ್ಬೇಕು. ಹಾಗಾದ್ರೆ ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಉಳಿಸಿದ ಸಂತಸವೂ ಸಿಗುತ್ತದೆ….